ಹೊಸದಿಲ್ಲಿ: ಭಾರತೀಯ ಟೆನ್ನಿಸ್ ರಂಗ ಈ ಹಿಂದೆ ಯಾವತ್ತೂ ಇರಲಾರದಷ್ಟು ಅಭೂತಪೂರ್ವ ಯುವ ಪ್ರತಿಭಾವಂತ ಆಟಗಾರರನ್ನು ಹೊಂದಿದ್ದು, ದೇಶದ ಟೆನ್ನಿಸ್ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಭಾರತದ ಡೇವಿಸ್ ಕಪ್ ಬಾಹ್ಯ ಕ್ಯಾಪ್ಟನ್ ಮಹೇಶ ಭೂಪತಿ ಹೇಳಿದ್ದಾರೆ.
ಇಂದು ನಾವು ಹೊಂದಿರುವಷ್ಟು ಟೆನ್ನಿಸ್ ಪ್ರತಿಭೆಯನ್ನು ಈ ಮುಂಚೆ ಯಾವತ್ತೂ ಹೊಂದಿರಲಿಲ್ಲ. ಪ್ರಜ್ಞೇಶ, ಯುಕಿ, ರಾಮ ಹಾಗೂ ಅವರೊಂದಿಗಿರುವ ಇನ್ನೂ ಹಲವಾರು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪುರುಷರ ಟೆನ್ನಿಸ್ನಲ್ಲಿ ಹೇರಳ ಪ್ರತಿಭೆ ಇದೆ ಎಂದು ಅವರು ಶ್ಲಾಘಿಸಿದರು.
ಹೊಸದಿಲ್ಲಿಯಲ್ಲಿ ನಡೆದ ಕೆಐಎ ಮೋಟರ್ ಇವೆಂಟ್ನಲ್ಲಿ ಅವರು ಮಾತನಾಡಿದರು. ಈ ಸಮಾರಂಭದಲ್ಲಿ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕ್ರೀಡಾಕೂಟಕ್ಕಾಗಿ 10 ಜನ ಯುವ ಟೆನ್ನಿಸ್ ಅಭಿಮಾನಿಗಳನ್ನು ಬಾಲ್ ಕಿಡ್ಸ್ಗಳಾಗಿ ಆಯ್ಕೆ ಮಾಡಲಾಯಿತು.
ಇತಿಹಾಸದಲ್ಲಿ ಪ್ರಥಮ ಬಾರಿಗೆ ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಮೂವರು ಪುರುಷ ಟೆನ್ನಿಸ್ ಆಟಗಾರರು ಸ್ಥಾನ ಪಡೆದಿದ್ದಾರೆ. ಭಾರತೀಯ ಆಟಗಾರ ಪ್ರಜ್ಞೇಶ ಗುನ್ನೇಸ್ವರನ್ 104ನೇ ರ್ಯಾಂಕ್ ಪಡೆದಿದ್ದರೆ, ರಾಮಕುಮಾರ ರಾಮನಾಥನ್ 133 ಹಾಗೂ ಯುಕಿ ಭಾಂಭ್ರಿ 137ನೇ ರ್ಯಾಂಕ್ ಪಡೆದಿದ್ದಾರೆ.
ಪ್ರಸ್ತುತ ಸೀಸನ್ ಕೊನೆಯಲ್ಲಿ ಮಹಿಳಾ ಆಟಗಾರ್ತಿಯರಾದ ಹರ್ಮನ್ ಮತ್ತು ಅಂಕಿತಾ ಉತ್ತಮ ಪ್ರದರ್ಶನ ನೀಡಿದ್ದು ಫಲಿತಾಂಶಗಳು ತುಂಬಾ ಸಕಾರಾತ್ಮಕವಾಗಿವೆ ಎಂದು ಭೂಪತಿ ತಿಳಿಸಿದ್ದಾರೆ.
ಜಾಗತಿಕ 213ನೇ ರ್ಯಾಂಕ್ ಪಡೆದಿರುವ ಅಂಕಿತಾ ರೈನಾ ಮತ್ತು 218ನೇ ರ್ಯಾಂಕ್ ಪಡೆದಿರುವ ಕರ್ಮಾನ್ ತಾಂಡಿ ಒಂದರ ಹಿಂದೊಂದು ಸತತವಾಗಿ ಎರಡು ಟೈಟಲ್ಗಳ ಗೆಲುವು ಸಾಧಿಸಿದ್ದಾರೆ. ಇವರಿಬ್ಬರ ಜೋಡಿಯು ಇತ್ತೀಚೆಗೆ ತೈಪೆಯಲ್ಲಿ ನಡೆದ ಡಬ್ಲ್ಯೂಟಿಎ ಡಬಲ್ಸ್ ಗೆದ್ದುಕೊಂಡಿದ್ದು, ಇದು ಈ ಜೋಡಿಯ ಪ್ರಥಮ ಟೈಟಲ್ ಗೆಲುವಾಗಿದೆ. ನಂತರ ಇವರು ಪುಣೆ ಓಪನ್ಸ್ ಟೈಟಲ್ ಸಹ ಗೆದ್ದುಕೊಂಡಿದ್ದಾರೆ.
ಭಾರತೀಯ ಟೆನ್ನಿಸ್ ರಂಗಕ್ಕೆ ಕಾರ್ಪೊರೇಟ್ ಸಂಸ್ಥೆಗಳಿಂದ ಹಣಕಾಸಿನ ನೆರವು ಅಗತ್ಯವಿದೆ ಎಂದು ಮಹೇಶ ಭೂಪತಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದ್ದು ಮಹತ್ವ ಪಡೆದುಕೊಂಡಿದೆ.
ಭಾರತದಲ್ಲಿ ಬೆಳೆದು ಬಂದಿರುವ ಯಾವುದೇ ಕ್ರೀಡೆಯನ್ನು ನೋಡಿದರೂ ಅದರ ಹಿಂದೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲ ಇರುವುದನ್ನು ಕಾಣುತ್ತೇವೆ. ಹಾಗೆಯೇ ಬಹುತೇಕ ಮೆಡಲಿಸ್ಟ್ಗಳು ಓಜಿಕ್ಯೂ ಅಥವಾ ಜೆಎಸ್ಡಬ್ಲ್ಯೂ ನಿಂದ ಬೆಂಬಲ ಪಡೆದವರೇ ಆಗಿದ್ದಾರೆ ಎಂದು ಭೂಪತಿ ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ಕಿಯಾ ಮೋಟರ್ಸ್ ಮಾಡುತ್ತಿರುವ ಕಾರ್ಯದಿಂದ ದೇಶದಲ್ಲಿ ಟೆನ್ನಿಸ್ ಸಂಸ್ಕೃತಿ ಬೆಳೆಸಲು ಸಹಾಯಕವಾಗಲಿದೆ ಎಂದು ಭೂಪತಿ ಕಿಯಾ ಮೋಟರ್ಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
2019 ರಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಗಾಗಿ ದೆಹಲಿಯ ಐವರು, ಮುಂಬೈ, ಚಂಡೀಗಢ, ಹರಿಯಾಣಾ, ಹೈದರಾಬಾದ ಮತ್ತು ಲಕ್ನೋ ನಿಂದ ತಲಾ ಓರ್ವರನ್ನು ಅಧಿಕೃತ ಕಿಯಾ ಬಾಲ್ ಕಿಡ್ಸ್ ಗಳಾಗಿ ಘೋಷಿಸಲಾಯಿತು. ಇವರಲ್ಲಿ ನಾಲ್ವರು ಬಾಲಕಿಯರಿದ್ದಾರೆ. ಈ ಎಲ್ಲ ಮಕ್ಕಳು ಟೂರ್ನಿಯಲ್ಲಿ ಭಾರತದ ಪರವಾಗಿ ಬಾಲ್ ಕಿಡ್ಸ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಂತಿಮ ಹಂತದ 100 ಬಾಲ್ ಕಿಡ್ಗಳನ್ನು ಗುರುತಿಸಲು ಭೂಪತಿ ನಿರ್ಣಾಯಕ ಪಾತ್ರ ವಹಿಸಿದ್ದು, ಎಲ್ಲರಿಗೂ ಅವರೇ ಮಾರ್ಗದರ್ಶನ ಸಹ ನೀಡಿದ್ದರು.
ಭಾರತದಿಂದ ಇದೇ ಪ್ರಥಮ ಬಾರಿಗೆ ಬಾಲ್ ಕಿಡ್ಗಳಾಗಿ ಟೆನ್ನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬಂದಿದೆ. ಹೀಗಾಗಿ ಸುಮಾರು 2000 ಟೆನ್ನಿಸ್ ಪ್ರೇಮಿ ಮಕ್ಕಳು ಬಾಲ್ ಕಿಡ್ಗಳಾಗಲು ಸ್ಪರ್ಧೆಯಲ್ಲಿದ್ದರು.
ಕಂಪೆನಿಯು ತನ್ನ ದೀರ್ಘಾವಧಿಯ ಬದ್ಧತೆಯನ್ನು ಆಚರಿಸುವ ಉದ್ದೇಶದಿಂದ ಯುವ ಟೆನ್ನಿಸ್ ಉತ್ಸಾಹಿಗಳಿಗೆ ಜಾಗತಿಕ ವೇದಿಕೆಯನ್ನು ಒದಗಿಸುವುದರೊಂದಿಗೆ ಅಕ್ಟೋಬರ್ನಲ್ಲಿ ಕಾರ್ಯಕ್ರಮಕ್ಕಾಗಿ ನಮೂದುಗಳನ್ನು ತೆರೆಯಿತು.
ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೋಲ್ಕತಾದ ನಾಲ್ಕು ಮೆಟ್ರೋಗಳಾದ್ಯಂತ ಮೊದಲ ಸೆಟ್ ಪ್ರಯೋಗಗಳನ್ನು ನಡೆಸಲಾಯಿತು. ರೋಲಿಂಗ್ ದಿ ಬಾಲ್, ಸ್ಪೀಡ್ ಮತ್ತು ಚುರುಕುತನ ಪರೀಕ್ಷೆ, ಸ್ಪೈಡರ್ ಡ್ರಿಲ್, ಬಾಲ್ ಮತ್ತು ಸಂವಹನ ಕೌಶಲ್ಯಗಳನ್ನು ಎಸೆಯುವುದು ಸೇರಿದಂತೆ ಐದು ಸುತ್ತಿನ ಪರೀಕ್ಷೆಗಳ ಮೂಲಕ ಅವುಗಳನ್ನು ಇರಿಸಲಾಯಿತು.
“ಈ ರೋಮಾಂಚಕಾರಿ ಉಪಕ್ರಮದ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ ಮತ್ತು ಈ ಪ್ರೋಗ್ರಾಂ ಭಾರತದ ಯುವ ಪ್ರತಿಭೆಯ ನಡುವೆ ಟೆನ್ನಿಸ್ ಬೆಳೆಸುತ್ತದೆ ಎಂದು ನನಗೆ ಖಾತ್ರಿಯಿದೆ.ಇದು ಮಕ್ಕಳಿಗಾಗಿ ಒಂದು ಜೀವಿತಾವಧಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಖಂಡಿತವಾಗಿ ಅವರ ಕೌಶಲ್ಯಗಳನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತವನ್ನು ಹೆಮ್ಮೆ ಪಡಿಸಲಿ ಎಂದು ಮಹೇಶ್ ಭೂಪತಿ ಹೇಳಿದರು.
ಇಂದು ನಾವು ಹೊಂದಿರುವಷ್ಟು ಟೆನ್ನಿಸ್ ಪ್ರತಿಭೆಯನ್ನು ಈ ಮುಂಚೆ ಯಾವತ್ತೂ ಹೊಂದಿರಲಿಲ್ಲ. ಪ್ರಜ್ಞೇಶ, ಯುಕಿ, ರಾಮ ಹಾಗೂ ಅವರೊಂದಿಗಿರುವ ಇನ್ನೂ ಹಲವಾರು ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪುರುಷರ ಟೆನ್ನಿಸ್ನಲ್ಲಿ ಹೇರಳ ಪ್ರತಿಭೆ ಇದೆ ಎಂದು ಅವರು ಶ್ಲಾಘಿಸಿದರು.
ಹೊಸದಿಲ್ಲಿಯಲ್ಲಿ ನಡೆದ ಕೆಐಎ ಮೋಟರ್ ಇವೆಂಟ್ನಲ್ಲಿ ಅವರು ಮಾತನಾಡಿದರು. ಈ ಸಮಾರಂಭದಲ್ಲಿ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಕ್ರೀಡಾಕೂಟಕ್ಕಾಗಿ 10 ಜನ ಯುವ ಟೆನ್ನಿಸ್ ಅಭಿಮಾನಿಗಳನ್ನು ಬಾಲ್ ಕಿಡ್ಸ್ಗಳಾಗಿ ಆಯ್ಕೆ ಮಾಡಲಾಯಿತು.
ಇತಿಹಾಸದಲ್ಲಿ ಪ್ರಥಮ ಬಾರಿಗೆ ಜಾಗತಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಮೂವರು ಪುರುಷ ಟೆನ್ನಿಸ್ ಆಟಗಾರರು ಸ್ಥಾನ ಪಡೆದಿದ್ದಾರೆ. ಭಾರತೀಯ ಆಟಗಾರ ಪ್ರಜ್ಞೇಶ ಗುನ್ನೇಸ್ವರನ್ 104ನೇ ರ್ಯಾಂಕ್ ಪಡೆದಿದ್ದರೆ, ರಾಮಕುಮಾರ ರಾಮನಾಥನ್ 133 ಹಾಗೂ ಯುಕಿ ಭಾಂಭ್ರಿ 137ನೇ ರ್ಯಾಂಕ್ ಪಡೆದಿದ್ದಾರೆ.
ಪ್ರಸ್ತುತ ಸೀಸನ್ ಕೊನೆಯಲ್ಲಿ ಮಹಿಳಾ ಆಟಗಾರ್ತಿಯರಾದ ಹರ್ಮನ್ ಮತ್ತು ಅಂಕಿತಾ ಉತ್ತಮ ಪ್ರದರ್ಶನ ನೀಡಿದ್ದು ಫಲಿತಾಂಶಗಳು ತುಂಬಾ ಸಕಾರಾತ್ಮಕವಾಗಿವೆ ಎಂದು ಭೂಪತಿ ತಿಳಿಸಿದ್ದಾರೆ.
ಜಾಗತಿಕ 213ನೇ ರ್ಯಾಂಕ್ ಪಡೆದಿರುವ ಅಂಕಿತಾ ರೈನಾ ಮತ್ತು 218ನೇ ರ್ಯಾಂಕ್ ಪಡೆದಿರುವ ಕರ್ಮಾನ್ ತಾಂಡಿ ಒಂದರ ಹಿಂದೊಂದು ಸತತವಾಗಿ ಎರಡು ಟೈಟಲ್ಗಳ ಗೆಲುವು ಸಾಧಿಸಿದ್ದಾರೆ. ಇವರಿಬ್ಬರ ಜೋಡಿಯು ಇತ್ತೀಚೆಗೆ ತೈಪೆಯಲ್ಲಿ ನಡೆದ ಡಬ್ಲ್ಯೂಟಿಎ ಡಬಲ್ಸ್ ಗೆದ್ದುಕೊಂಡಿದ್ದು, ಇದು ಈ ಜೋಡಿಯ ಪ್ರಥಮ ಟೈಟಲ್ ಗೆಲುವಾಗಿದೆ. ನಂತರ ಇವರು ಪುಣೆ ಓಪನ್ಸ್ ಟೈಟಲ್ ಸಹ ಗೆದ್ದುಕೊಂಡಿದ್ದಾರೆ.
ಭಾರತೀಯ ಟೆನ್ನಿಸ್ ರಂಗಕ್ಕೆ ಕಾರ್ಪೊರೇಟ್ ಸಂಸ್ಥೆಗಳಿಂದ ಹಣಕಾಸಿನ ನೆರವು ಅಗತ್ಯವಿದೆ ಎಂದು ಮಹೇಶ ಭೂಪತಿ ಇದೇ ಸಂದರ್ಭದಲ್ಲಿ ಪ್ರತಿಪಾದಿಸಿದ್ದು ಮಹತ್ವ ಪಡೆದುಕೊಂಡಿದೆ.
ಭಾರತದಲ್ಲಿ ಬೆಳೆದು ಬಂದಿರುವ ಯಾವುದೇ ಕ್ರೀಡೆಯನ್ನು ನೋಡಿದರೂ ಅದರ ಹಿಂದೆ ಕಾರ್ಪೊರೇಟ್ ಸಂಸ್ಥೆಗಳ ಬೆಂಬಲ ಇರುವುದನ್ನು ಕಾಣುತ್ತೇವೆ. ಹಾಗೆಯೇ ಬಹುತೇಕ ಮೆಡಲಿಸ್ಟ್ಗಳು ಓಜಿಕ್ಯೂ ಅಥವಾ ಜೆಎಸ್ಡಬ್ಲ್ಯೂ ನಿಂದ ಬೆಂಬಲ ಪಡೆದವರೇ ಆಗಿದ್ದಾರೆ ಎಂದು ಭೂಪತಿ ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ಕಿಯಾ ಮೋಟರ್ಸ್ ಮಾಡುತ್ತಿರುವ ಕಾರ್ಯದಿಂದ ದೇಶದಲ್ಲಿ ಟೆನ್ನಿಸ್ ಸಂಸ್ಕೃತಿ ಬೆಳೆಸಲು ಸಹಾಯಕವಾಗಲಿದೆ ಎಂದು ಭೂಪತಿ ಕಿಯಾ ಮೋಟರ್ಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
2019 ರಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಗಾಗಿ ದೆಹಲಿಯ ಐವರು, ಮುಂಬೈ, ಚಂಡೀಗಢ, ಹರಿಯಾಣಾ, ಹೈದರಾಬಾದ ಮತ್ತು ಲಕ್ನೋ ನಿಂದ ತಲಾ ಓರ್ವರನ್ನು ಅಧಿಕೃತ ಕಿಯಾ ಬಾಲ್ ಕಿಡ್ಸ್ ಗಳಾಗಿ ಘೋಷಿಸಲಾಯಿತು. ಇವರಲ್ಲಿ ನಾಲ್ವರು ಬಾಲಕಿಯರಿದ್ದಾರೆ. ಈ ಎಲ್ಲ ಮಕ್ಕಳು ಟೂರ್ನಿಯಲ್ಲಿ ಭಾರತದ ಪರವಾಗಿ ಬಾಲ್ ಕಿಡ್ಸ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಅಂತಿಮ ಹಂತದ 100 ಬಾಲ್ ಕಿಡ್ಗಳನ್ನು ಗುರುತಿಸಲು ಭೂಪತಿ ನಿರ್ಣಾಯಕ ಪಾತ್ರ ವಹಿಸಿದ್ದು, ಎಲ್ಲರಿಗೂ ಅವರೇ ಮಾರ್ಗದರ್ಶನ ಸಹ ನೀಡಿದ್ದರು.
ಭಾರತದಿಂದ ಇದೇ ಪ್ರಥಮ ಬಾರಿಗೆ ಬಾಲ್ ಕಿಡ್ಗಳಾಗಿ ಟೆನ್ನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಒದಗಿ ಬಂದಿದೆ. ಹೀಗಾಗಿ ಸುಮಾರು 2000 ಟೆನ್ನಿಸ್ ಪ್ರೇಮಿ ಮಕ್ಕಳು ಬಾಲ್ ಕಿಡ್ಗಳಾಗಲು ಸ್ಪರ್ಧೆಯಲ್ಲಿದ್ದರು.
ಕಂಪೆನಿಯು ತನ್ನ ದೀರ್ಘಾವಧಿಯ ಬದ್ಧತೆಯನ್ನು ಆಚರಿಸುವ ಉದ್ದೇಶದಿಂದ ಯುವ ಟೆನ್ನಿಸ್ ಉತ್ಸಾಹಿಗಳಿಗೆ ಜಾಗತಿಕ ವೇದಿಕೆಯನ್ನು ಒದಗಿಸುವುದರೊಂದಿಗೆ ಅಕ್ಟೋಬರ್ನಲ್ಲಿ ಕಾರ್ಯಕ್ರಮಕ್ಕಾಗಿ ನಮೂದುಗಳನ್ನು ತೆರೆಯಿತು.
ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೋಲ್ಕತಾದ ನಾಲ್ಕು ಮೆಟ್ರೋಗಳಾದ್ಯಂತ ಮೊದಲ ಸೆಟ್ ಪ್ರಯೋಗಗಳನ್ನು ನಡೆಸಲಾಯಿತು. ರೋಲಿಂಗ್ ದಿ ಬಾಲ್, ಸ್ಪೀಡ್ ಮತ್ತು ಚುರುಕುತನ ಪರೀಕ್ಷೆ, ಸ್ಪೈಡರ್ ಡ್ರಿಲ್, ಬಾಲ್ ಮತ್ತು ಸಂವಹನ ಕೌಶಲ್ಯಗಳನ್ನು ಎಸೆಯುವುದು ಸೇರಿದಂತೆ ಐದು ಸುತ್ತಿನ ಪರೀಕ್ಷೆಗಳ ಮೂಲಕ ಅವುಗಳನ್ನು ಇರಿಸಲಾಯಿತು.
“ಈ ರೋಮಾಂಚಕಾರಿ ಉಪಕ್ರಮದ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ ಮತ್ತು ಈ ಪ್ರೋಗ್ರಾಂ ಭಾರತದ ಯುವ ಪ್ರತಿಭೆಯ ನಡುವೆ ಟೆನ್ನಿಸ್ ಬೆಳೆಸುತ್ತದೆ ಎಂದು ನನಗೆ ಖಾತ್ರಿಯಿದೆ.ಇದು ಮಕ್ಕಳಿಗಾಗಿ ಒಂದು ಜೀವಿತಾವಧಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಖಂಡಿತವಾಗಿ ಅವರ ಕೌಶಲ್ಯಗಳನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ಭಾರತವನ್ನು ಹೆಮ್ಮೆ ಪಡಿಸಲಿ ಎಂದು ಮಹೇಶ್ ಭೂಪತಿ ಹೇಳಿದರು.